ಶ್ರೀ ಬನಶಂಕರಿ ಕಂಬೈನ್ಸ್ರವರ ದ್ವಿತೀಯ ಕಾಣಿಕೆ ಶ್ರೀಮತಿ. ಆಶಾ ಗುಣಶೇಖರ್ ನಿರ್ಮಾಣದ ಮಕ್ಕಳೇ ಮಾಣಿಕ್ಯ ಚಿತ್ರಕ್ಕೆ ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮುಹುರ್ತ ನೆರವೇರಿತು. ಬಾಲ ಕಲಾವಿದರು ಪಾಲ್ಗೊಂಡಿದ್ದ ಕೆ.ಸಿ.ಎನ್. ಚಂದ್ರಶೇಖರ್ ಕ್ಲಾಪ್ ಮಾಡಿದಾಗ - ಅಜಯ್ ಸಿಂಗ್ ಕ್ಯಾಮೆರಾ ಚಲನೆ ಮಾಡಿ ಚಿತ್ರೀಕರಣಕ್ಕೆ ಅಣಿ ಮಾಡಿಕೊಟ್ಟರು. ಚಿತ್ರದ ಚಿತ್ರಕಥೆ ನಿರ್ದೇಶನ ಕೋಡ್ಲು ರಾಮಕೃಷ್ಣ. ಕಥೆ ಸಂಭಾಷಣೆ ಜೆ.ಎಂ.ಪ್ರಹ್ಲಾದ್, ಛಾಯಾಗ್ರಹಣ ನವೀನ್ ಸುವರ್ಣ. ಸಂಗೀತ ವಿಜಯ ಕೃಷ್ಣ ಕಲೆ ಮೋಹನ್ ತೀರ್ಥಹಳ್ಳಿ. ನಿರ್ಮಾಣ ವಿನ್ಯಾಸ - ನಂದಕುಮಾರ್, ಸಹ ನಿರ್ದೇಶನ-ಅಂಬರೀಶ್ ಅಶೋಕ್, ನಿರ್ವಹಣೆ-ಕೆ.ಹೆಚ್. ಮೂರ್ತಿ, ತಾರಾಗಣದಲ್ಲಿ ಗೌರವ ಪಾತ್ರದಲ್ಲಿ ಅನಂತನಾಗ್, ಶಿವಧ್ವಜ್, ರಮೇಶ್ ಭಟ್, ಕಿರಣ್ ಕುಮಾರ್, ಬ್ಯಾಂಕ್ ಜನಾರ್ಧನ್, ನವನೀತ, ನಿಹಾರಿಕಾ, ತನುಜಾ, ಮಾಸ್ಟರ್ ಲಕ್ಷರಾಜ್, ಮಾಸ್ಟರ್ ರಿಷಿಪ್, ಮಾಸ್ಟರ್ ಅರ್ಹಾನ್ ಜೈನ್, ಮಾಸ್ಟರ್ ಧನವಂತ್, ಮಾಸ್ಟರ್ ಹೇಮಂತ್, ಮಾಸ್ಟರ್ ಸೂರಿಸಾಥಿ, ಮಾಸ್ಟರ್ ಅಭಿರಾಮ್, ಮಾಸ್ಟರ್ ಮನೋಜ್, ಕುಮಾರಿ ಟಿಯಾ, ಸೈನಾ, ಭುವನಾ, ಸಿಂಛನ, ಮೇಘನಾ, ಕೀರ್ತನಾ, ಮುಂತಾದವರಿದ್ದಾರೆ.